ವಿಜಯಪುರ: ಪ್ರವಾಹದ ಸಂತ್ರಸ್ತರ ಪರವಾಗಿ ಬ್ಯಾಟ್ ಬೀಸ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ ಎನ್ನಲಾಗ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕರು, ನನ್ಗೆ ನೋಟಿಸ್ ಬಂದಿಲ್ಲ. ಬಂದ್ರೆ, ಅದಕ್ಕೆ ಏನು ಉತ್ತರ ಕೊಡಬೇಕೋ ಅದನ್ನು ಕೊಡುತ್ತೇನೆ ಅಂತಾ ಹೇಳಿದ್ದಾರೆ.
ಪರಿಹಾರ ಕೊಡಿಸದಿದ್ರೆ ಸಂಸದರಾಗಿ, ಶಾಸಕರಾಗಿ, ಸಚಿವರಾಗಿದ್ದು ಏನು ಪ್ರಯೋಜನ. ನಾನೇನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮತ ಹಾಕಿಲ್ಲ. ಹೀಗಿರುವಾಗ ಅದ್ಹೇಗೆ ಪಕ್ಷ ವಿರೋಧಿ ಎಂದು ಹೇಳುತ್ತೀರಿ ಅಂತಾ ಪ್ರಶ್ನೆ ಮಾಡಿದ್ದಾರೆ.
ಮಂತ್ರಿ ಮಾಡಿಲ್ಲ ಎಂದು ನಾನು ಹೇಳಿಕೆ ನೀಡಿಲ್ಲ. ಜನರಿಗೆ ಒಳ್ಳೆಯದಾಗಬೇಕು ಅನ್ನೋ ಕಾರಣಕ್ಕೆ ಮಾತ್ನಾಡಿದ್ದೇನೆ. ಬಿ.ಎಲ್ ಸಂತೋಷ, ರಾಜ್ಯ ಘಟಕದ ಅಧ್ಯಕ್ಷರ ಹೆಸರು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡರೆ ನಾನೇನು ಮಾಡ್ಲಿ ಅಂತಾ ತುಂಬಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.