ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಸಿಡಿಲು ಬಡೆದು ತಾಯಿ ಮಗಳು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.
ಅರವಿಂದ ಉಮ್ಮರ್ಗಿ ಎಂಬುವರ ಹೊಲದಲ್ಲಿ ಕೆಲಸಕ್ಕೆ ಬಂದಿದ್ದ ವೆಂಕಪ್ಪ, ಮಹಾದೇವಿ ವೆಂಕಪ್ಪ ಭಜಂತ್ರಿ(36) ಹಾಗೂ ಮಗಳು ಸೋನು ವೆಂಕಪ್ಪ ಭಜಂತ್ರಿ(12) ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ.
ತಾಯಿ ಮಗಳು ಒಂದೇ ಗಿಡದ ಕೆಳಗೆ ಇದ್ದ ಕಾರಣ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ವೆಂಕಪ್ಪ ಬಜಂತ್ರಿಯನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಅಪಾಯ ಇಲ್ಲ ಎಂದು ತಿಳಿದುಬಂದಿದೆ.