ಪ್ರಜಾಸ್ತ್ರ ಕ್ರೀಡಾ ಸುದ್ದಿ
ಶೇಕ್ ಝಾಯೀದ್ ಸ್ಟೇಡಿಯಂನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಐಪಿಎಲ್ ಟಿ 20ಯ 24ನೇ ಪಂದ್ಯದಲ್ಲಿ ಕೆ.ಎಲ್ ರಾಹುಲ ಹಾಗೂ ದಿನೇಶ ಕಾರ್ತಿಕ ಟೀಂ ಎದುರು ಬದುರು ಆಗುತ್ತಿವೆ.
ಕೆಕೆಆರ್ ಕ್ಯಾಪ್ಟನ್ ಕಾರ್ತಿಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಶೇಕಡ 56ರಷ್ಟು ಕೆಕೆಆರ್ ಗೆಲ್ಲುತ್ತೆ ಅಂದ್ರೆ, ಶೇಕಡ 44 ಪಂಜಾಬ್ ಎಂದು ಹೇಳಲಾಗ್ತಿದೆ. ಆಡಿರುವ 6 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿರುವ ಪಂಜಾಬ್ ಕೊನೆಯ ಸ್ಥಾನದಲ್ಲಿದೆ.
ಇನ್ನು ಕೆಕೆಆರ್ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 4ನೇ ಸ್ಥಾನದಲ್ಲಿದೆ. ಹೀಗಾಗಿ ಇವತ್ತಿನ ಪಂದ್ಯ ಪಂಜಾಬ್ ಗೆಲ್ಲಲೇಬೇಕಾಗಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಶುರುವಾಗಲಿದೆ.