ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಧ್ಯಾಪಕರ ನಡುವಿನ ಕಿತ್ತಾಟ ಇದೀಗ ಠಾಣೆ ಮೆಟ್ಟಿಲು ಏರಿದೆ. ಸಸ್ಯಶಾಸ್ತ್ರ ವಿಭಾಗದ ಹೆಚ್ಒಡಿ ಡಾ.ಜಿ.ಎಂ ವಿದ್ಯಾಸಾಗರ ಅವರಿಗೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಎಸ್.ಪಿ ಮೇಲಕೇರಿ ಕಪಾಳಮೋಕ್ಷ ಮಾಡಿದ್ದು, ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಈ ಪ್ರಕರಣ ಸಂಬಂಧ ಮೇಲಕೇರಿ ಹಾಗೂ ಡಾ.ಪ್ರತಿಮಾ ಮಠ ವಿರುದ್ಧ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಡಾ.ಪ್ರತಿಮಾ ಮಠ, ಹಲ್ಲೆಗೆ ಕುಮ್ಮಕ್ಕು ನೀಡಿದ್ದು, ಜೀವ ಬೆದರಿಕೆ ಸಹ ಹಾಕಿದ್ದಾರೆ ಎಂದು ಹೇಳಲಾಗಿದೆ.
ಪ್ರೊ.ಮೇಲಕೇರಿ ಸಹೋದರನ ಪುತ್ರರೊಬ್ಬರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಪಿಲ್ ಮಾಡ್ತಿದ್ದು, ಆತನ ವಿಚಾರದಲ್ಲಿ ಇಬ್ಬರು ಪ್ರಾಧ್ಯಾಪಕರ ನಡುವೆ ಗಲಟೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದಾಗಿ ವಿವಿ ಬಗ್ಗೆ ಜನರು ಆಡಿಕೊಳ್ಳುವಂತಾಗಿದೆ.