ಕುಂದಾನಗರಿಯಲ್ಲಿ ‘ಕೈ’ಗೆ ಬಿಗ್ ಶಾಕ್

408

ಬೆಳಗಾವಿ: ಕುಂದಾನಗರಿ ಬೆಳಗಾವಿ ರಾಜಕೀಯದಲ್ಲಿ ಮತ್ತೊಂದು ಅಲೆ ಎದ್ದಿದೆ. ಅದು ಕಾಂಗ್ರೆಸ್ ವಿರುದ್ಧವಾದ ಅಲೆಯಾಗಿದೆ. ತಾಲೂಕು ಪಂಚಾಯ್ತಿಯ 23 ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಗೋಕಾಕ ತಾಲೂಕು ಪಂಚಾಯ್ತಿಯಲ್ಲಿ 42 ಸದಸ್ಯ ಬಲವಿದೆ. ಇದರಲ್ಲಿ ಕಾಂಗ್ರೆಸ್ ನ 23 ಸದಸ್ಯರು ಇಓಗೆ ರಾಜೀನಾಮ ಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ, ಇದರ ಹಿಂದೆ ಇರೋದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಎನ್ನಲಾಗ್ತಿದೆ. ಈ ಬಗ್ಗೆ ನನ್ಗೆ ಮಾಹಿತಿ ಇಲ್ಲವೆಂದು ರಮೇಶ ಜಾರಕಿಹೊಳಿ ಹೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!