ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಎಲ್ಲರಿಗೂ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಗತ್ ಸಿಂಗ್ 113ನೇ ಜನುಮ ದಿನದ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಧಾನಿ, ಸಣ್ಣವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ರ ಶೌರ್ಯ ಎಲ್ಲ ವಯಸ್ಸಿನವರಿಗೆ ಸ್ಪೂರ್ತಿ ನೀಡುತ್ತೆ ಎಂದಿದ್ದಾರೆ.
ಕೇವಲ 23 ವರ್ಷದಲ್ಲಿ ಇರುವಾಗ ಅವರನ್ನ ಗಲ್ಲಿಗೇರಿಸಲಾಯ್ತು. ಅವರ ತ್ಯಾಗ ಬಲಿದಾನದಿಂದ ದೇಶದಕ್ಕೆ ಸ್ವಾತಂತ್ರ್ಯ ಬಂದಿದೆ. ಅವರ ಜನ್ಮ ವಾರ್ಷಿಕೋತ್ಸವ ದೇಶದ ಜನರಲ್ಲಿ ಕ್ರಾಂತಿಯ ಕಿಡಿಯನ್ನ ಹಚ್ಚುತ್ತೆ. ಅವರಿಗೆ ತುಂಬು ಹೃದಯದಿಂದ ಗೌರವ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.