ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಭರ್ಜರಿ ಹೋರಾಟ ನಡೆದಿದೆ. ಈ ಬಗ್ಗೆ ಮಾತ್ನಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, ನಾನು ಸಹ ರೈತ ಹೋರಾಟದಿಂದ ಬಂದವನು. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದ್ರೆ, ಇದು ಕಾಂಗ್ರೆಸ್ ಪಿತೂರಿ ಎಂದು ಕಿಡಿ ಕಾರಿದ್ದಾರೆ.
ಕಾಯ್ದೆ ತಿದ್ದುಪಡಿ ಬಗ್ಗೆ ರೈತ ಮುಖಂಡರಿಗೆ ನಾನು ಮನವರಿಕೆ ಮಾಡಿದೆ. ಆದ್ರೆ, ಅವರು ಅದಾಗ್ಲೇ ಬಂದ್ ಮಾಡಲು ನಿರ್ಧರಿಸಿದ್ರು. ನಾನು ಸಹ ರೈತನ ಮಗನಾಗಿದ್ದೇನೆ. ಅವರಿಂದಲೇ ನಾಲ್ಕು ಬಾರಿ ಸಿಎಂ ಆಗಿದ್ದೇನೆ. ಈ ಕಾಯ್ದೆ ತಿದ್ದುಪಡಿಯಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ ಎಂದಿದ್ದಾರೆ.
ಇನ್ನು ಇವತ್ತು ಪ್ರತಿಭಟನೆ ಮಾಡ್ತಿದ್ದೀರಿ ಮಾಡಿ. ಆದ್ರೆ, ನಾಳೆ ಬೇಕಾದ್ರೆ ನೀವು ಚರ್ಚೆಗೆ ಬನ್ನಿ. ಇದರ ಸಾಧಕ ಬಾಧಕಗಳ ಬಗ್ಗೆ ಕಳಿತು ಮಾತ್ನಾಡೋಣ ಎಂದಿದ್ದಾರೆ. ಯಾರೊಂದಿಗೂ ಚರ್ಚಿಸಿದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದ್ಮೇಲೆ ಮತ್ತೇನು ಚರ್ಚಿಸುವುದು ಅನ್ನೋ ಮಾತುಗಳು ಕೇಳಿ ಬಂದಿವೆ.