ಕಾಯ್ದೆ ಬಗ್ಗೆ ಭರವಸೆಯಿದ್ರೆ ವಿಧಾನಸಭೆ ವಿಸರ್ಜಿಸಿ: ಸಿದ್ದು

318

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆ ಬಗ್ಗೆ ಪ್ರಣಾಳಿಕೆಯಲ್ಲಿ ಕೇಳದೆ ಜಾರಿಗೆ ತರಲಾಗಿದೆ. ಇದ್ರಿಂದ ರೈತರಿಗೆ ಅನುಕೂಲವಾಗುತ್ತೆ ಎನ್ನುತ್ತಿರುವ ಸಿಎಂ ಬಿ.ಎಸ್ ಯಡಿಯೂರಪ್ಪನವರು, ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರೋನಾ ಸಂಕಷ್ಟದಿಂದ ಜನರು ಒದ್ದಾಡ್ತಿದ್ದಾರೆ. ಹೀಗಾಗಿ ಜನರು ಸರಿಯಾಗಿ ಬೀದಿಗೆ ಬಂದು ಹೋರಾಟ ಮಾಡಲು ಆಗ್ತಿಲ್ಲ. ಹೀಗಾಗಿ ತರಾತುರಿಯಲ್ಲಿ ಹೊರಟಿದೆ. ಇದು ಕರೋನಾ ವೈರಸ್ ಗಿಂತಲೂ ಮಾರಣಾಂತಿಕವಾಗಿದೆ. ರೈತ ಹೋರಾಟಕ್ಕ ನನ್ನ ಬೆಂಬಲವಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!