ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಂದಗಿ ತಾಲೂಕು ತಳವಾರ ನೌಕರರ ಸಂಘದ ಅಧ್ಯಕ್ಷರನ್ನಾಗಿ ಶಿಕ್ಷಕ ಭರತೇಶ ಹಿರೋಳ್ಳಿ ಅವರನ್ನು ನೇಮಕ ಮಾಡಲಾಗಿದೆ. ಭಾನುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ತಳವಾರ ಮಹಾಸಭಾದ ಕಾರ್ಯಕ್ರಮದಲ್ಲಿ ನೇಮಕ ಮಾಡಲಾಗಿದೆ.
ಸಾಕಷ್ಟು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಶಿಕ್ಷಕ ಭರತೇಶ ಹಿರೋಳ್ಳಿ ಅವರನ್ನು ಸಿಂದಗಿ ತಾಲೂಕು ತಳವಾರ ನೌಕರರ ಸಂಘದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಪ್ರಕಾಶ ಕೊಟರಗಸ್ತಿ, ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ, ಮುಖಂಡ ಶರಣಪ್ಪ ಕಣಮೇಶ್ವರ, ರಾಜು ನರಗೋಧಿ, ಗುರು ತಳವಾರ, ಬಸವರಾಜ ಭೂತಿ, ಸಂಜೀವಕುಮಾರ ಡಾಂಗಿ, ಮಲ್ಲು ಹಿರೋಳ್ಳಿ ಸೇರಿ ಇತರರು ಉಪಸ್ಥಿತರಿದ್ದರು.