ಈಗ ದೇವನೂರ ಬರಹ ಕೈ ಬಿಡಲು ಸಾಧ್ಯವಿಲ್ಲ

185

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶಾಲಾ ಮಕ್ಕಳ ಪುಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಎದ್ದಿರುವ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಈಗ ದೇವನೂರ ಮಹಾದೇವ ಬರಹ ಕೈ ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಪಠ್ಯ ಪುಸ್ತಕದಲ್ಲಿ ತಮ ಪಾಠ ತೆಗೆಯುವಂತೆ ಮೊದಲೇ ಹೇಳಿದ್ದರೆ ಚರ್ಚಿಸಬಹುದಿತ್ತು. ಈಗ ಪಠ್ಯಪುಸ್ತಕ ಮುದ್ರಣಗೊಂಡಿವೆ. ಇನ್ನೇನು ಮಕ್ಕಳ ಕೈ ಸೇರಲಿವೆ. ಈ ಪಠ್ಯ ಕೈ ಬಿಡಲು ಆಗುವುದಿಲ್ಲ. ಇದನ್ನು ಅವರಿಗೆ ಮನವರಿಕೆ ಮಾಡುತ್ತೇವೆ. ನಮ್ಮ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ನಮಗಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!