ಪ್ರಜಾಸ್ತ್ರ ಸುದ್ದಿ
ಲಖ್ನೋ: ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅದು ಸಮಾಜವಾದಿ ಪಕ್ಷದೊಂದಿಗೆ ಕೂಡಿಕೊಂಡು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರೊಂದಿಗೆ ಕೂಡಿಕೊಂಡು ನಾಮಪತ್ರ ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಇಲ್ಲದೆ ಇರೋದಕ್ಕೆ, ಎಸ್ಪಿಯಿಂದ ಸ್ಪರ್ಧಿಸಿದ್ದಾರೆ. ಇನ್ನು 2017ರಲ್ಲಿ ಯಾದವ್ ಕುಟುಂಬದ ಜಗಳದಲ್ಲಿ ಅಖಿಲೇಶ್ ಯಾದವ್ ಗೆ ಬೈಸಿಕಲ್ ಚಿಹ್ನೆ ಸಿಗಬೇಕೆಂದು ಕೋರ್ಟ್ ನಲ್ಲಿ ವಾದ ಮಾಡಿ ಗೆಲುವು ತಂದು ಕೊಟ್ಟಿದ್ದರು.