ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ: ಕಪಿಲ್ ಸಿಬಲ್

198

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪಂಜಾಬ್ ನಲ್ಲಿ ಕಾಂಗ್ರೆಸ್ ಆತಂರಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿರುವ ಹಿರಿಯ ನಾಯಕ ಕಪಿಲ್ ಸಿಬಲ್, ನಮ್ಮ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ. ಈ ಎಲ್ಲ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ನಮಗೆ ತಿಳಿದೂ ತಿಳಿಯದಂತಾಗಿದೆ ಎಂದಿದ್ದಾರೆ.

ನಾವು ಪಕ್ಷ ತೊರೆದು ಎಲ್ಲಿಗೂ ಹೋಗುವುದಿಲ್ಲ. ಯಾರು ಪಕ್ಷದ ನಾಯಕತ್ವಕ್ಕೆ ಹತ್ತಿರದಲ್ಲಿದ್ದರೂ ಅವರೆ ದೂರವಾಗಿದ್ದಾರೆ. ಯಾರು ಹತ್ತಿರದವರಲ್ಲವೆಂದು ಭಾವಿಸಲಾಗಿತ್ತೋ ಅವರೆ ಜೊತೆಗಿದ್ದಾರೆ. ಪಕ್ಷ ತೊರೆದವರು ಮರಳಿ ಪಕ್ಷಕ್ಕೆ ಬರಬೇಕು. ಕಾಂಗ್ರೆಸ್ ಮಾತ್ರವೇ ಗಣರಾಜ್ಯ ಉಳಿಸಲು ಸಾಧ್ಯ ಅಂತಾ ಹೇಳಿದ್ದಾರೆ.

ಇನ್ನು ಗಡಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಹೀಗಾಗಿದೆ ಎಂದರೆ ಅದು ಪಾಕಿಸ್ತಾನಕ್ಕೆ ಹಾಗೂ ಐಎಸ್ಐಗೆ ಅನುಕೂಲ. ನಮಗೆಲ್ಲ ಪಂಜಾಬಿನ ಇತಿಹಾಸ ತಿಳಿದಿದೆ. ಅಲ್ಲಿನ ತೀವ್ರವಾದದ ಬಗ್ಗೆಯೂ ಗೊತ್ತಿದೆ ಎನ್ನುವ ಮೂಲಕ ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!