ಕೈ ನಾಯಕರ ಅಸಮಾಧಾನ, ಹರಿಪ್ರಸಾದ್ ರಾಜೀನಾಮೆ?

101

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. 24 ನಾಯಕರು ಸಚಿವರಾಗಿದ್ದಾರೆ. ಕೆಲವರು ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ. ಶಾಸಕರೂ ಅಲ್ಲ, ಎಂಎಲ್ಸಿಯೂ ಇರದ ಓರ್ವ ನಾಯಕನಿಗೆ ಸಚಿವ ಸ್ಥಾನ ಸಿಕ್ಕಿದೆ. ಹೀಗಾಗಿ ಮಂತ್ರಿಗಿರಿ ತಪ್ಪಿದ ಹಿರಿಯ ನಾಯಕರ ಅಸಮಾಧಾನ ಹೊರ ಹಾಕುತ್ತಿದ್ದು, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಹಿರಿಯ ನಾಯಕರಾದ ಆರ್.ವಿ ದೇಶಪಾಂಡೆ, ಟಿ.ಬಿ ಜಯಚಂದ್ರ, ರುದ್ರಪ್ಪ ಲಮಾಣಿ, ವಿನಯ ಕುಲಕರ್ಣಿ, ಬಿಜೆಪಿಯಿಂದ ಸಿಡಿದೆದ್ದು ಬಂದ ಲಕ್ಷ್ಮಣ ಸವದಿ, ಜೆಡಿಎಸ್ ನಿಂದ ಹೊರ ಬಂದ ಶಿವಲಿಂಗೇಗೌಡ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗೆ ಸಚಿವ ಸ್ಥಾನ ಸಿಗದ ಅನೇಕ ಅಸಮಾಧಾನಗೊಂಡಿದ್ದು, ಬಹಿರಂಗವಾಗಿ ಎಲ್ಲಿಯೂ ವ್ಯಕ್ತಪಡಿಸುತ್ತಿಲ್ಲ. ಪಕ್ಷದೊಳಗೆ ಒಂದಿಷ್ಟು ಮುನಿಸು ನಡೆದಿದೆ.




Leave a Reply

Your email address will not be published. Required fields are marked *

error: Content is protected !!