ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಂಪೂರ್ಣವಾಗಿದ್ದು, ಯಾರಿಗೆ ಯಾವ ಖಾತೆ ಅನ್ನೋ ಕುತೂಹಲ ಸಾರ್ವಜನಿಕರಲ್ಲಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಯಾರಿಗೆ ಯಾವ ಖಾತೆ ನೀಡಲಾಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹಣಕಾಸು, ಸಚಿವ ಸಂಪುಟ ವ್ಯವಹಾರ, ಆಡಳಿತಾತ್ಮಕ ಖಾತೆ, ಮಾಹಿತಿ ಮತ್ತು ಗುಪ್ತಚರ, ಡಿಸಿಎಂ ಡಿ.ಕೆ ಶಿವಕಮಾರ್ ಬಳಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ ಖಾತೆ ಇದೆ.
ಡಾ.ಜಿ ಪರಮೇಶ್ವರ್-ಗೃಹ ಖಾತೆ, ಹೆಚ್.ಕೆ ಪಾಟೀಲ-ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ಕೈಗಾರಿಕೆ, ಕೆ.ಹೆಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ, ಗ್ರಾಹಕರ ಸೇವೆ, ಕೆ.ಜೆ ಜಾರ್ಜ್- ವಿದ್ಯುತ್, ಎಂ.ಬಿ ಪಾಟೀಲ- ಬೃಹತ್ ಹಾಗೂ ಮಧ್ಯಮ ಕೈಗಾರಿಕೆ , ಐಟಿಬಿಟಿ, ರಾಮಲಿಂಗಾ ರೆಡ್ಡಿ- ಸಾರಿಗೆ, ಸತೀಶ್ ಜಾರಕಿಹೊಳಿ- ಸಾರ್ವಜನಿಕ ಸೇವೆ, ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಜಮೀರ್ ಅಹ್ಮದ್- ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತ ಖಾತೆ ನೀಡಲಾಗಿದೆ.
ಕೃಷ್ಣ ಬೈರೇಗೌಡ- ಕಂದಾಯ, ದಿನೇಶ್ ಗುಂಡೂರಾವ್- ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಎನ್.ಚೆಲುವರಾಯಸ್ವಾಮಿ- ಕೃಷಿ, ಕೆ.ವೆಂಕಟೇಶ್-ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿ, ಹೆಚ್.ಸಿ ಮಹಾದೇವಪ್ಪ- ಸಮಾಜ ಕಲ್ಯಾಣ, ಈಶ್ವರ ಖಂಡ್ರೆ- ಅರಣ್ಯ, ಪರಿಸರ, ಕೆ.ಎನ್ ರಾಜಣ್ಣ- ಸಹಕಾರ ಖಾತೆ, ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ, ಸಾಮಾಜಿಕ ಕ್ಷೇತ್ರದ ಕೈಗಾರಿಕೆ, ಶಿವಾನಂದ ಪಾಟೀಲ-ಜವಳಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಹಕಾರಿ ಖಾತೆ, ಆರ್.ಬಿ ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ, ಎಸ್.ಎಸ್ ಮಲ್ಲಿಕಾರ್ಜುನ್- ಗಣಿಗಾರಿಕೆ ಹಾಗೂ ಭೂಖಾತೆ, ಹನಿನೀರಾವರಿ, ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ ಹಾಗೂ ಎಸ್ಟಿ ಕಲ್ಯಾಣ ಇಲಾಖೆ, ಶರಣಪ್ರಕಾಶ್ ಪಟೇಲ್- ಉನ್ನತ ಶಿಕ್ಷಣ, ಮಂಕಾಳ ವೈದ್ಯ- ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ, ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬುದ್ಧಿಮಾಂದ್ಯ ಹಾಗೂ ಹಿರಿಯ ನಾಯಕರ ಸೇವೆ, ರಹೀಂ ಖಾನ್- ನಗರಾಭಿವೃದ್ಧಿ ಹಾಗೂ ಹಝ್, ಡಿ.ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ ಹಾಗೂ ಯೋಜನೆ ಹಾಗೂ ಅಂಕಿಅಂಶ, ಸಂತೋಷ್ ಲಾಡ್- ಕಾರ್ಮಿಕ, ಕೌಶಲ್ಯ ಅಭಿವೃದ್ಧಿ, ಎನ್.ಎಸ್ ಬೊಸೇರಾಜ್- ಪ್ರವಾಸ, ವಿಜ್ಞಾನ ಮತ್ತು ತಂತ್ರಜ್ಞಾನ, ಭೈರತಿ ಸುರೇಶ್- ನಗರಾಭಿವೃದ್ಧಿ ಹಾಗೂ ನಗರ ಯೋಜನೆ, ಮಧು ಬಂಗಾರಪ್ಪ- ಶಿಕ್ಷಣ, ಎಂ.ಸಿ ಸುಧಾಕರ್-ವೈದ್ಯಕೀಯ ಶಿಕ್ಷಣ, ಬಿ.ನಾಗೇಂದ್ರ- ಯುವ ಯೋಜನೆ, ಕ್ರೀಡಾ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನೀಡಲಾಗಿದೆ.