ಕೋಟೆನಾಡಿನಲ್ಲಿ ಹೋರಿ ಕದ್ದವನ ಬೆತ್ತಲೆ ಮೆರವಣಿಗೆ

365

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಹೋರಿ ಕದ್ದಿದ್ದಾನೆ ಅನ್ನೋ ಕಾರಣಕ್ಕೆ ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡಿಸಿದ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಹಿರಿಯೂರು ತಾಲೂಕಿನ ಸೂರಪ್ಪನಹಟ್ಟಿ ಹತ್ತಿರದ ಸ್ವರಸ್ವತಿ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೋರಿ ಕದ್ದವನು ಬಡಗೊಲ್ಲರಹಟ್ಟಿಯ ಈಶ್ವರ ಎಂದು ತಿಳಿದು ಬಂದಿದ್ದು, ಮೊದಲು ಗ್ರಾಮಸ್ಥರು ಕೈ ಕಾಲು ಕಟ್ಟಿ ಥಳಿಸಿದ್ದಾರೆ. ಬಳಿಕ ಮುಖಕ್ಕೆ ಕೆಂಪು ಬಣ್ಣ ಬಳೆದು ಬೆತ್ತಲೆ ಮಾಡಿ ಕತ್ತೆ ಮೇಲೆ ಕೂರಿಸಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ.

ಗ್ರಾಮದ ಸೀಗಜ್ಜಿ ಹಾಗೂ ಬಾಲಣ್ಣ ಎಂಬುವರ ಹೋರಿ ಕದ್ದು ಬೇರೆ ಕಡೆ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ತಾಲೂಕು ಆಡಳಿತಾಧಿಕಾರಿ, ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!