ಅಪಘಾತ, ದೊಡ್ಮನೆಯ ಯುವ ನಟನಿಗೆ ಗಂಭೀರ ಗಾಯ

175

ಪ್ರಜಾಸ್ತ್ರ ಸುದ್ದಿ

ಮೈಸೂರು: ಕನ್ನಡ ಚಿತ್ರರಂಗದ ದೊಡ್ಮನೆ ಅಂತಾನೆ ಕರೆಸಿಕೊಳ್ಳುವ ಡಾ.ರಾಜಕುಮಾರ್ ಅವರ ಕುಟುಂಬದ ಯುವ ನಟ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದಾರೆ. ಶನಿವಾರ ರಾತ್ರಿ ನಂಜನಗೂಡು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಯುವ ನಟ ಸೂರಜ್ ಬಲಕಾಲು ಕಟ್ ಆಗಿದೆ.

ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾಲಿನ ಮೇಲೆ ಟಿಪ್ಪರ್ ಹರಿದ ಪರಿಣಾಮ ಗಂಭೀರ ಗಾಯವಾಗಿತ್ತು. ಇದರಿಂದಾಗಿ ವೈದ್ಯರು ಮಂಡಿಯವರೆಗೂ ಕಾಲು ಕತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಟ ಶಿವರಾಜಕುಮಾರ್ ದಂಪತಿ, ನಿರ್ಮಾಪಕ ಚಿನ್ನೇಗೌಡ ಅವರು ಮೈಸೂರಿಗೆ ತೆರಳಿದ್ದಾರೆ.

ಯುವ ನಟ ಸೂರಜ್ ಭಗವಾನ ಶ್ರೀಕೃಷ್ಣ ಪರಮಾತ್ಮ ಚಿತ್ರದಲ್ಲಿ ನಟಿಸುತ್ತಿದ್ದರು. ಈ ಘಟನೆ ಯುವ ನಟನ ಬಾಳಲ್ಲಿ ದೊಡ್ಡ ಆಘಾತ ಅಂತಾನೇ ಹೇಳಬಹುದು.




Leave a Reply

Your email address will not be published. Required fields are marked *

error: Content is protected !!