ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ: ಇಬ್ಬರ ಸಾವು

140

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿ ಅದ್ಯಾಕೋ ಸಾವಿನ ಹೆದ್ದಾರಿ ಆಗುತ್ತಿದೆ ಅನ್ನೋ ಅನುಮಾನ ಸಾರ್ವಜನಿಕರಿಗೆ ಕಾಡಲು ಶುರುವಾಗಿದೆ. ಯಾಕಂದರೆ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸಿ ಜೀವಗಳು ಹೋಗುತ್ತಿವೆ. ಇಂದು ಮುಂಜಾನೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಮದ್ದೂರು ಪಟ್ಟಣದ ಹೆದ್ದಾರಿಯ ಫ್ಲೈಓವರ್ ಮೇಲೆ ಅಪಘಾತ ನಡೆದಿದೆ. ಮಣಿ(25), ಜನಾರ್ಧನ್ ಪೂಜಾರಿ(21) ಮೃತ ಯುವಕರೆಂದು ತಿಳಿದು ಬಂದಿದೆ. ಇವರಿಬ್ಬರು ಕೊಪ್ಪಳ ಹಾಗೂ ಕೋಲಾರ ಮೂಲದವರಾಗಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!