ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿ ಅದ್ಯಾಕೋ ಸಾವಿನ ಹೆದ್ದಾರಿ ಆಗುತ್ತಿದೆ ಅನ್ನೋ ಅನುಮಾನ ಸಾರ್ವಜನಿಕರಿಗೆ ಕಾಡಲು ಶುರುವಾಗಿದೆ. ಯಾಕಂದರೆ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸಿ ಜೀವಗಳು ಹೋಗುತ್ತಿವೆ. ಇಂದು ಮುಂಜಾನೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
ಮದ್ದೂರು ಪಟ್ಟಣದ ಹೆದ್ದಾರಿಯ ಫ್ಲೈಓವರ್ ಮೇಲೆ ಅಪಘಾತ ನಡೆದಿದೆ. ಮಣಿ(25), ಜನಾರ್ಧನ್ ಪೂಜಾರಿ(21) ಮೃತ ಯುವಕರೆಂದು ತಿಳಿದು ಬಂದಿದೆ. ಇವರಿಬ್ಬರು ಕೊಪ್ಪಳ ಹಾಗೂ ಕೋಲಾರ ಮೂಲದವರಾಗಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.