ಅಕ್ಕಿ ಜಗಳ, ಕೇಂದ್ರದ ವಿರುದ್ಧ ಶೆಟ್ಟರ್ ಕಿಡಿ

129

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಕಾಂಗ್ರೆಸ್ ನೀಡಿರುವ 10 ಕೆಜಿ ಅಕ್ಕಿ ನೀಡುವ ಗ್ಯಾರೆಂಟಿಗೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆದಿದೆ. ಮೊದಲು ಅಕ್ಕಿ ನೀಡುವುದಾಗಿ ಹೇಳಿದ್ದ ಎಫ್ ಸಿಐ, ನಂತರ ಉಲ್ಟಾ ಹೊಡೆಯಿತು ಅನ್ನೋದು ಕಾಂಗ್ರೆಸ್ ಮಾತು. ಈಗ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಸಹ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯಕ್ಕೆ ಅಕ್ಕಿ ನೀಡದೆ ಇರುವುದು ಅಕ್ಷಮ್ಯ ಅಪರಾಧ. ಇದು ಉತ್ತಮವಾದ ನಡೆಯಲ್ಲ. ಮೊದಲು ಕೊಡುತ್ತೇವೆ ಎಂದು ಈಗ ನಿರಾಕರಿಸುತ್ತಿರುವುದು ಸರಿಯಲ್ಲ. ಹೆಚ್ಚುವರಿ ಅಕ್ಕಿ ಕೊಡಬೇಕು ಎಂದು ಒತ್ತಾಯಿಸಿದರು.

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ವಿತರಣೆ ಸಂಬಂಧ ರಾಜ್ಯ, ಕೇಂದ್ರದ ನಡುವಿನ ಆರೋಪ, ಪ್ರತ್ಯಾರೋಪದಿಂದಾಗಿ ಯೋಜನೆ ಜಾರಿಗೆ ಬರುವುದು ಸ್ವಲ್ಪ ತಡವಾಗಲಿದೆ. ಜುಲೈ 1ರಿಂದ ಜಾರಿಗೆ ಬರುವುದು ಕಷ್ಟ ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!