ನವದೆಹಲಿ: ನೆರೆಯ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ನಡೆದ ಮೇಲೆ ಬಹುತೇಕ ಸಂಬಂಧಗಳನ್ನ ಕಡೆದುಕೊಂಡಂತಾಗಿದೆ. ಇದೀಗ ಭಾರತ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಮೋದಿ ಟೀಂ ಫ್ಲೈಟ್ ಅಟ್ಯಾಕ್ ಮಾಡಿದೆ.
ಪಾಕಿಸ್ತಾನ ಮಾರ್ಗವಾಗಿ ಹೋಗುವ ಏರ್ ಇಂಡಿಯಾ ವಿಮಾನದ ಮಾರ್ಗವನ್ನ ಭಾರತ ಬದಲಿಸಿದೆ. ಪಾಕ್ ಮೂಲಕ ಕರ್ಗಿಸ್ತಾನ್ ಬಿಶ್ಕಾಗೆ ಹೋಗುವ ವಿಮಾನದ ಮಾರ್ಗವನ್ನ ಬದಲಿಸಿದೆ. ಬುಧುವಾರ ಈ ಬಗ್ಗೆ ತಿಳಿಸಲಾಗಿದ್ದು, ಒಮನ್ ಮತ್ತು ಇರಾನ್ ಮಾರ್ಗವಾಗಿ ಬಿಶ್ಕಾಗೆ ಫ್ಲೈಟ್ ತೆರಳಲಿದೆ.
ಇನ್ನು ಜೂನ್ 13 ಮತ್ತು 14ರಂದು ಶಾಂಘೈನಲ್ಲಿ ಶೃಂಗಸಭೆ ನಡೆಯಲಿದೆ. ಇಂದು ತೆರಳಲಿರುವ ಭಾರತದ ವಿಶೇಷ ವಿಮಾನಗಳು ಪಾಕಿಸ್ತಾನದ ಮಾರ್ಗ ತಪ್ಪಿಸಿ ನೇರವಾಗಿ ಶಾಂಗೈ ತಲುಪಲಿವೆ. ಇದಕ್ಕೆ ಹೆಚ್ಚುವರಿಯಾಗಿ ನಾಲ್ಕು ಗಂಟೆ ಸಮಯ ತೆಗೆದುಕೊಳ್ಳಲಿದೆ. ಇನ್ನು ಈಗಾಗ್ಲೇ ಪ್ರಧಾನಿ ಮೋದಿ ಕರ್ಗಿಸ್ತಾನಕ್ಕೆ ತೆರಳಿದ್ದಾರೆ.
ಈ ಮೂಲಕ ಪಾಕಿಸ್ತಾನದ ವಾಯು ದಿಕ್ಕಿನಲ್ಲಾಗಲಿ, ಅದರ ಪ್ರದೇಶದ ಮೂಲಕವಾಗ್ಲಿ ಭಾರತದ ವಿಮಾನಳು ಚಲಿಸುವುದಿಲ್ಲ ಅಂತಾ ತಿಳಿಸಲಾಗಿದೆ. ಇದು ಪಾಕ್ ಗೆ ಮತ್ತೊಂದು ರೀತಿಯ ಮುಖಭಂಗವಾಗಿದೆ.