ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ: ಬಿಜೆಪಿಯ ಖುಷ್ಬು ವಾಗ್ದಾಳಿ

176

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಗುಜರಾತಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 11 ಜರನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ನಾಯಕಿ ಖುಷ್ಬು ಸುಂದರ್ ಖಂಡಿಸಿದ್ದಾರೆ. ಇದೊಂದು ಮನುಕುಲಕ್ಕೆ ಮಾಡಿದ ಅವಮಾನ ಎಂದಿದ್ದಾರೆ.

ಅತ್ಯಾಚಾರ, ಹಲ್ಲೆ, ಕ್ರೌರ್ಯ, ಜೀವಮಾನವಿಡಿ ಅನುಭವಿಸುವ ಗಾಯವಾದಂತ ಮಹಿಳೆಯರಿಗೆ ನ್ಯಾಯ ಸಿಗಬೇಕು. ಇದರಲ್ಲಿ ಭಾಗಿಯಾದ ವ್ಯಕ್ತಿಗಳು ಮುಕ್ತವಾಗಬಾರದು. ಹಾಗೆಯಾದರೆ ಮನುಕುಲಕ್ಕೆ, ಹೆಣ್ಣಿನ ಕುಲಕ್ಕೆ ಮಾಡಿದ ಅವಮಾನ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೀವಾವಧಿ ಶಿಕ್ಷೆಗೆ ಗುರಿಯಾದ 11 ಅಪರಾಧಿಗಳು ಗೋದ್ರಾ ಉಪಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಸನ್ಮಾನಿಸಿ ಸ್ವಾಗತಿಸಲಾಗಿದೆ. ಬಿಜೆಪಿ ಮುಖಂಡನೊಬ್ಬ ಅವರು ಬ್ರಾಹ್ಮಣರು, ಸುಸ್ಕೃಂತರು ಎಂದು ಬೆಂಬಲಿಸಿದ್ದಾನೆ. ಅಪರಾಧಿಗಳ ಬಿಡುಗಡೆ, ನೀಚರಿಗೆ ಸನ್ಮಾನ ಮಾಡಿರುವುದನ್ನು ನಿವೃತ್ತಿ ನ್ಯಾಯಮೂರ್ತಿಗಳು ಸೇರಿದಂತೆ ಜೀವಪರ ವ್ಯಕ್ತಿಗಳು ಖಂಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!