ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಮೊಬೈಲ್ ಟವರ್ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 23ರಂದು ಭಾಗ್ಯನಗರದಲ್ಲಿ ನಡೆದ ಗಲಾಟೆ ಸಂಬಂಧ, ಪಾಲಿಕೆಯ ಬಿಜೆಪಿ ಸದಸ್ಯನನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ಅಭಿಜಿತ್ ಜವಳಕರ್ ಬಂಧಿತ ಬಿಜೆಪಿ ಸದಸ್ಯ.
ಗಲಾಟೆಗೆ ಸಂಬಂಧಿಸಿದಂತೆ ರಮೇಶ್ ಪಾಟೀಲ ಎಂಬಾತನನ್ನು ಬಂಧಿಸಲಾಗಿತ್ತು. ಅಭಿಜಿತ್ ಬಂಧನಕ್ಕೆ ಆಗ್ರಹಿಸಿ ಎಂಇಎಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದ್ದರು. ಟಿಳಕವಾಡಿ ಪೊಲೀಸರು ರಾತ್ರಿ ಬಂಧಿಸಿದ್ದಾರೆ.