ಪ್ರಜಾಸ್ತ್ರ ಸುದ್ದಿ
ಮುಂಬೈ: ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 15 ವರ್ಷಗಳು ಕಳೆದಿವೆ. ಈ ಕಾರಳ ನೆನಪು ಇಂದಿಗೂ ಎಲ್ಲರಿಗೂ ಕಾಡುತ್ತಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿರ್ಮಿಸಿದ ಸ್ಮಾರಕಕ್ಕೆ, ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಸಿಎಂ ಏಕನಾಥ್ ಶಿಂಧೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಸಿಎಂ ಶಿಂಧೆ, ಹುತಾತ್ಮ ಕುಟುಂಬಗಳೊಂದಿಗೆ ನಾವು ಇದ್ದೇವೆ ಅಂತಾ ಹೇಳಿದರು.
ನವೆಂಬರ್ 26, 2008ರಲ್ಲಿ ಉಗ್ರರು ದಾಳಿ ನಡೆಸಿ ನಾಲ್ಕು ದಿನಗಳಲ್ಲಿ 166 ಜನರು ಮೃತಪಟ್ಟಿದ್ದಾರೆ. 18 ಜನ ಪೊಲೀಸರು ಹಾಗೂ ಯೋಧರು ಹುತಾತ್ಮರಾಗಿದ್ದಾರೆ. 300 ಜನರು ಗಾಯಗೊಂಡಿದ್ದಾರೆ.