ಬಿಎಸ್ವೈ ವೈಯಕ್ತಿಕ ರಾಜ್ಯ ಪ್ರವಾಸಕ್ಕೆ ತಡೆ.. ಜನ ಸ್ವರಾಜ್ ಯಾತ್ರೆಗೆ ತಂಡ ಪ್ರಕಟ

223

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಂಬರುವ 2023ರ ಚುನಾವಣೆ ದೃಷ್ಟಿಯಿಂದ ಮಾಜಿ ಸಿಎಂ ಯಡಿಯೂರಪ್ಪ ವೈಯಕ್ತಕವಾಗಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದರು. ಬಿಎಸ್ವೈ ವೈಯಕ್ತಿಕ ರಾಜ್ಯ ಪ್ರವಾಸಕ್ಕೆ ತಡೆ ಹಿಡಿಯಲಾಗಿದೆಯಂತೆ. ಇದರ ಬದಲು ಜನ ಸ್ವರಾಜ್ ಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, 4 ತಂಡಗಳನ್ನು ಪ್ರಕಟಿಸಲಾಗಿದೆ.

ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ 1ನೇ ತಂಡ, ಯಡಿಯೂರಪ್ಪ 2ನೇ ತಂಡ, ಕೆ.ಎಸ್ ಈಶ್ವರಪ್ಪ 3ನೇ ತಂಡ, ಜಗದೀಶ್ ಶೆಟ್ಟರ್ 4ನೇ ತಂಡವನ್ನು ಮುನ್ನಡೆಸಲಿದ್ದಾರೆ. ಇವರೊಂದಿಗೆ ಕೇಂದ್ರ ಹಾಗೂ ರಾಜ್ಯ ಸಚಿವರು ಸಾಥ್ ನೀಡಲಿದ್ದಾರೆ. ಒಂದೊಂದು ತಂಡಕ್ಕೆ ನೀಡಿರುವ 7-8 ಜಿಲ್ಲೆಗಳಲ್ಲಿ ಜನ ಸ್ವರಾಜ್ ಯಾತ್ರೆ ನಡೆಸುವ ಮೂಲಕ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ನವೆಂಬರ್ 19ರಿಂದ ಇದು ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!