ಹುಬ್ಬಳ್ಳಿಯಲ್ಲಿ ಬಾಕ್ಸ್ ‘ಸ್ಫೋಟ’ಕ ರಹಸ್ಯ: ನೋ ಬಿಜೆಪಿ.. ನೋ ಕಾಂಗ್ರೆಸ್.. ಓನ್ಲಿ ಶಿವಸೇನ..

436

ಹುಬ್ಬಳ್ಳಿ: ನಗರದ ನೈರುತ್ಯ ರೈಲ್ವೆ ನಿಲ್ದಾಣದ ಫ್ಲಾಟ್ ನಂಬರ್ 1ರಲ್ಲಿ ಬಾಕ್ಸ್ ಬ್ಲಾಸ್ಟ್ ನಡೆದಿದೆ. ಈ ವೇಳೆ 22 ವರ್ಷದ ಹಸೇನ ಸಾಬ ಕೈಯೊಂದು ಛಿದ್ರವಾಗಿದೆ. ಈ ಘಟನೆ ಸಾಕಷ್ಟು ಅನುಮಾನಗಳನ್ನ ಹುಟ್ಟಿಸಿದೆ. ಯಾಕಂದ್ರೆ, ಬಾಕ್ಸ್ ಮೇಲೆ ನೋ ಬಿಜೆಪಿ.. ನೋ ಕಾಂಗ್ರೆಸ್.. ಓನ್ಲಿ ಶಿವಸೇನ ಎಂದು ಬರೆದಿತ್ತು ಎಂದು ಹೇಳಲಾಗ್ತಿದೆ.

ಇನ್ನು ಇದು ಪಾರ್ಸಲ್ ಬಾಕ್ಸ್ ಅಲ್ಲ. ಯಾರೋ ತಂದು ರೈಲ್ವೆ ನಿಲ್ದಾಣದಲ್ಲಿ ಇಟ್ಟು ಹೋಗಿರುವುದಾಗಿದೆ ಅಂತಾ ಹೇಳಲಾಗ್ತಿದೆ. 10 ಲೀಟರ್ ನಷ್ಟು ನೀರು ಹಿಡಿಯುವ ಬಕೆಟ್ ರೀತಿಯ ಬಾಕ್ಸ್ ಇದು. ಸ್ಥಳೀಯರು ಇದನ್ನು ಸ್ಟೇಷನ್ ಮ್ಯಾನೇಜರ್ ಗೆ ಕೊಟ್ಟಿದ್ದಾರೆ. ಇದನ್ನ ಹುಸೇನ ಸಾಬ ಅವರಿಗೆ ಓಪನ್ ಮಾಡಲು ಹೇಳಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ, ಇದು ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ

ಅನುಮಾನಸ್ಪದ ವಸ್ತು ಕಂಡು ಬಂದಾಗ, ಅದನ್ನ ಪರಿಶೀಲನೆ ಮಾಡದೆ, ಏಕಾಏಕಿ ಓಪನ್ ಮಾಡಲು ಹೇಳಿದ್ದು ಎಷ್ಟು ಸರಿ ಅಂತಾ ಹೇಳಲಾಗ್ತಿದೆ. ಮಹಾರಾಷ್ಟ್ರ ಮೂಲದಿಂದ ಈ ಒಂದು ಬಾಕ್ಸ್ ಬಂದಿರಬಹುದು ಅನ್ನೋದು ಅದರ ಮೇಲೆ ಬರೆದಿರುವ ವಿಷ್ಯದಿಂದ ತಿಳಿದು ಬರ್ತಿದೆ. ಆದ್ರೆ, ಇದರ ಮೂಲ ಏನು ಅನ್ನೋದು ಸದ್ಯಕ್ಕೆ ತಿಳಿದಿಲ್ಲ.

ಮೊದಲು ನಿಂಬೆಹಣ್ಣು ಇತ್ತು. ದೇವರ ಪ್ರಸಾದ ಎಂದು ಬಾಕ್ಸ್ ಓಪನ್ ಮಾಡಿದೆ. ಸ್ಫೋಟವಾಯ್ತು ಎಂದು ಗಾಯಾಳು ಹುಸೇನ ಸಾಬ ಹೇಳಿದ್ದಾರೆ. ಅಲ್ದೇ ಆರ್ ಪಿಎಸ್ ರವಿ ಅವರು ಓಪನ್ ಮಾಡಿ ಅಂತಾ ಹೇಳಿದ್ದಕ್ಕೆ ಬಾಕ್ಸ್ ಓಪನ್ ಮಾಡಿದೆ ಅಂತಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಹುಸೇನ ಸಾಬ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!