ಈಜಲು ಹೋಗಿ ವಿಜಯಪುರದಲ್ಲಿ ಯುವಕ ಸಾವು

418

ಮುದ್ದೇಬಿಹಾಳ: ಕಾಲುವೆಯಲ್ಲಿ ಈಜಲು ಹೋಗಿ ಈಜು ಬಾರದೇ ಯುವಕ ಸಾವನ್ನಪ್ಪಿದ್ದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ರಸ್ತೆ ಬದಿಯಲ್ಲಿರುವ ಚಿಮ್ಮಲಗಿ ಏತ ನೀರಾವರಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಹುಂಡೆಕಲ್ಲ ಗ್ರಾಮದ ನಿವಾಸಿ 20 ವರ್ಷದ ಲಾಲಸಾಬ ಇಮಾಮಸಾಬ ಶೇಖ ಮೃತ ಯುವಕನಾಗಿದ್ದಾನೆ. ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಮುದ್ದೇಬಿಹಾಳದ ಸಂಗಮೇಶ್ವರನಗರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬಟ್ಟೆ ತೊಳೆಯಲು ಮನೆಯವರೆಲ್ಲರೂ ರಿಕ್ಷಾದಲ್ಲಿ ಕಾಲುವೆಗೆ ಹೋಗಿದ್ದರು. ಈ ವೇಳೆ ಯುವಕ ಈಜಲು ಹೋದಾಗ ದುರ್ಘಟನೆ ನಡೆದಿದೆ. ಮೃತದೇಹ ಇಂದು ಪತ್ತೆಯಾಗಿದೆ. ಸ್ಥಳಕ್ಕೆ  ಪಿಎಸೈ ಮಲ್ಲಪ್ಪ ಮಡ್ಡಿ ಭೇಟಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!