ಬುದ್ಧ ಪೂರ್ಣಿಮಾ: ದೇಶದ ಜನತೆಗೆ ಪ್ರಧಾನಿ ಸಂದೇಶ

354

ನವದೆಹಲಿ: ದೇಶದ ಜನತೆಗೆ ಬುದ್ಧ ಪೂರ್ಣಿಮಾ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಈ ಸಂಕಷ್ಟದ ದಿನಗಳಿಂದ ಆದಷ್ಟು ಬೇಗ ಹೊರ ಬರುವ ವಿಶ್ವಾಸವಿದೆ ಎಂದಿದ್ದಾರೆ. ಇದೇ ವೇಳೆ ದೇಶದ ಜನತೆಗೆ ಕರೆ ನೀಡಿದ್ದು, ಸ್ವಾರ್ಥವಿಲ್ಲದೆ ಭಾರತ ವಿಶ್ವದ ಜೊತೆ ನಿಂತಿದೆ. ಸಮಯದ ಜೊತೆ ನಾವು ಬದಲಾಗಿ, ಎಲ್ಲರಿಗೂ ಸಹಾಯ ಮಾಡಬೇಕಿದೆ ಎಂದರು. ವಿಡಿಯೋ ಸಂವಾದದ ಮೂಲಕ ಪ್ರಧಾನಿ ಕರೆ ನೀಡಿದ್ದಾರೆ.

ಈ ಸಮಯದಲ್ಲಿ ಬುದ್ಧನ ವಿಚಾರಗಳು ಪ್ರಸ್ತುತವಾಗಿವೆ. ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಅಗತ್ಯವಾಗಿದೆ. ಭಾರತದ ಸಂಸ್ಕೃತಿ ಸದಾ ಹೊಸ ದಾರಿ ತೋರಿಸಿದೆ. ಸಹಾಯ ಮಾಡ್ತಿರುವ ಎಲ್ಲ ಬುದ್ಧ ಅನುಯಾಯಿಳಿಗೆ ಧನ್ಯವಾದಗಳು. ಇನ್ನೂ ಕಠಿಣ ಸ್ಥಿತಿಯಲ್ಲಿ ಜಯಸಬೇಕಿದೆ. ಬುದ್ಧ ನಾಲ್ಕು ಸತ್ಯಗಳನ್ನ ಹೇಳಿದ್ದಾರೆ. ದಯೆ, ಕರುಣೆ, ಸುಖ-ದುಃಖ ಅವುಗಳು ಹೇಗೆ ಇವೆಯೋ ಹಾಗೇ ಪಾಲಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ ಕರೋನಾದಿಂದ ಹತಾಶೆಯಲ್ಲಿರುವವರಿಗೆ ಸಹಾಯ ಮಾಡೋಣ. ದೇಶದ ಜನರ ಕಷ್ಟಗಳನ್ನ ಕಡಿಮೆ ಮಾಡಲು ನಾವೆಲ್ಲ ಪ್ರಯತ್ನಿಸೋಣವೆಂದು ಸಂದೇಶ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!