ಬೆಂಗಳೂರು: ಕರುನಾಡಿಗೆ ಒಂದಾದ್ಮೇಲೆ ಒಂದು ರೀತಿಯ ಸೈಕ್ಲೋನ್ ಎಫೆಕ್ಟ್ ಆಗ್ತಿದೆ. ಪಶ್ಚಿಮ ಬಂಗಾಳ, ಅರಬ್ಬಿ ಸಮುದ್ರ ಭಾಗದ ಚಂಡಮಾರುತದಿಂದ ಮಳೆಯ ಆರ್ಭಟ ನಿರಂತರವಾಗಿದೆ. ಇದೀಗ ನಾಡಿಗೆ ಬುಲ್ ಬುಲ್ ಚಂಡಮಾರುತ ಎಂಟ್ರಿ ಆಗ್ತಿದೆ.
ಧಾರವಾಡ-ಹುಬ್ಬಳ್ಳಿ, ಶಿವಮೊಗ್ಗ, ಕೊಡಗು ಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆಯಿಂದಲೇ ಮಳೆ ಶುರುವಾಗಿದೆ. ಬಿಸಿಲು ಅನ್ನೋದು ಅಪರೂಪವಾಗಿದೆ. ಹೀಗಾಗಿ ಮತ್ತೆ ಭರ್ಜರಿಯಾಗಿ ಮಳೆಯಾಗುವ ಲಕ್ಷಣಗಳಿವೆ. ಆದ್ರೆ, ಒಂದು ಸಮಾಧಾನದ ವಿಷ್ಯ ಅಂದ್ರೆ ಕ್ಯಾರ್ ಹಾಗೂ ಮಹಾ ಚಂಡಮಾರುತದಷ್ಟು ಬುಲ್ ಬುಲ್ ಎಫೆಕ್ಟ್ ಇರುವುದಿಲ್ಲ ಅನ್ನೋದು.
ಬುಲ್ ಬುಲ್ ಚಂಡಮಾರುತದ ಪ್ರಭಾವ ರಾಜ್ಯದ ಇತರೆ ಭಾಗಗಳ ಮೇಲಾಗುವ ಸಾಧ್ಯತೆಯೂ ಇದೆ. ಹೀಗಾಗಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ.