ಬೆಂಗಳೂರು: ಅರಣ್ಯ ಇಲಾಖೆ ರೈತರಿಗೊಂದು ಖುಷಿಯ ಸುದ್ದಿಯನ್ನ ನೀಡಿದೆ. ಈ ಮೂಲಕ ಬಹುದಿನಗಳ ಅವರ ಕಷ್ಟಕ್ಕೆ ಬ್ರೇಕ್ ಬೀಳಬಹುದು. ಅದೇನು ಅಂದ್ರೆ, ಇನ್ಮುಂದೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದ್ರೆ ಶೀಘ್ರದಲ್ಲಿ ಪರಿಹಾರ ಸಿಗಲಿದೆ.
ಅರಣ್ಯ ಇಲಾಖೆ ಹೊಸ ಆ್ಯಪ್ ವೊಂದು ರೆಡಿ ಮಾಡಿದೆ. ಇದರ ಮೂಲಕ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದ ರೈತರಿಗೆ ಸುಲಭವಾಗಿ ಪರಿಹಾರ ಸಿಗುತ್ತೆ. ಅವರು ಕಚೇರಿಗೆ ಅಲೆಯುವ ತಾಪತ್ರಯ ಸಹ ಇರುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯಾದ ಹೊಲಕ್ಕೆ ಬಂದು ಪರಿಶೀಲನೆ ಮಾಡ್ತಾರೆ. ಆ್ಯಪ್ ಮೂಲಕ ಬೆಳೆ ಪರಿಹಾರ ಅರ್ಜಿ, ದೃಢೀಕರಣ ಪತ್ರ, ಹಾನಿಯಾದ ಬೆಳೆಯ ಫೋಟೋ, ವಿಡಿಯೋಗಳ ವಿವಿರಗಳೊಂದಿಗೆ ಅಪ್ಲೋಡ್ ಮಾಡಿ ಮೇಲಾಧಿಕಾರಿಗೆ ಕಳುಹಿಸ್ತಾರೆ.
ಆ್ಯಪ್ ಮೂಲಕ ಬಂದ ದಾಖಲೆಗಳನ್ನ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ರೈತರಿಗೆ ಬೆಳೆ ಹಾನಿ ಪರಿಹಾರ ಸಿಗಲಿದೆ. ಇದು ಅತ್ಯಂತ ಸುಲಭವಾಗಿ ಸಿಗಲಿದೆ ಎಂದು ಹೇಳಲಾಗಿದೆ. ಕಾರ್ಯರೂಪಕ್ಕೆ ಬಂದಾಗ ಇದರ ಪರಿಣಾಮ ತಿಳಿಯಲಿದೆ.