ಪ್ರಜಾಸ್ತ್ರ ಅಪರಾಧ ಸುದ್ದಿ
ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಎಂಬುವರನ್ನ ಕೊಲೆ ಮಾಡಿ, ಹೋಮ ಕುಂಡದಲ್ಲಿ ಹಾಕಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ, ಮಗ ಸೇರಿದಂತೆ ಮೂವರನ್ನ ದೋಷಿಗಳು ಎಂದು, ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ, ಮಗ ನವನೀತ ಹಾಗೂ ರಾಜೇಶ್ವರಿ ಸ್ನೇಹಿತ ನಿರಂಜನ ಭಟ್ಟ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. 4ನೇ ಆರೋಪಿ ನಿರಂಜನ ತಂದೆ ಮೃತಪಟ್ಟಿದ್ದಾನೆ. 5ನೇ ಆರೋಪಿ ಸಾಕ್ಷಿ ನಾಶದ ಆರೋಪ ಎದುರಿಸ್ತಿದ್ದ ರಾಘವೇಂದ್ರನನ್ನ ಕೋರ್ಟ್ ಖುಲಾಸೆಗೊಳಿಸಿದೆ.
ಕಳೆದ 2016 ಜುಲೈ 28ರ ಮಧ್ಯಾಹ್ನ ಸುಮಾರು 3ಗಂಟೆಯ ಸಮಯದಲ್ಲಿ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ ಶೆಟ್ಟಿಯನ್ನ ಕೊಲೆ ಮಾಡಲಾಗಿತ್ತು. ನಂತರ ನಂದಳಿಕೆಯಲ್ಲಿರುವ ನಿರಂಜನ ಭಟ್ಟ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟು ಹಾಕಲಾಗಿತ್ತು. ಜುಲೈ 31ರಂದು ಭಾಸ್ಕರ ತಾಯಿ, ಮಗ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ರು. ತನಿಖೆ ನಡೆಸಿದ ಪೊಲೀಸರು 8 ದಿನಗಳ ಬಳಿಕ ಪತ್ನಿ ಹಾಗೂ ಮಗನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ತಿಳಿದಿತ್ತು.