ಉಚಿತ ಬಸ್ ನೆಪದಲ್ಲಿ ಹೆಣ್ಮಕ್ಕಳು ಎಲ್ಲೆಲ್ಲೋ ಹೋಗ್ತಿದ್ದಾರೆ: ಶ್ರುತಿ

83

ಪ್ರಜಾಸ್ತ್ರ ಸುದ್ದಿ

ಉಡುಪಿ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ನಟಿ, ಬಿಜೆಪಿಯ ಶ್ರುತಿ, ಬಿಟ್ಟಿ ಭಾಗ್ಯಗಳನ್ನು ಕೊಡ್ತಿದ್ದಾರೆ. ಹೆಣ್ಮಕ್ಕಳಿಗೆ ಉಚಿತ ಬಸ್ ಅಂತಾರೆ. ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಗತಿಯಿಲ್ಲ. ಮನೆಯಲ್ಲಿ ಗಂಡಸು ಅಳತಾ ಇದ್ದಾರೆ.  ನನ್ನ ಹೆಂಡ್ತಿ ಎಲ್ಲಿಗೆ ಹೋದಳು ಗೊತ್ತಿಲ್ಲ ಅಂತಾ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಉಚಿತ ಬಸ್ ಅನ್ನೋ ನೆಪದಲ್ಲಿ ಎಲ್ಲೆಲ್ಲೋ ಹೋಗ್ತಿದ್ದಾರೆ. ತೀರ್ಥಯಾತ್ರೆ ನೆಪದಲ್ಲಿ ಎಲ್ಲಿ ಹೋಗಬೇಕಂತ ಗೊತ್ತಿಲ್ಲ. ಗೊತ್ತು ಗುರಿಯಿಲ್ಲದಂಗೆ ಮಾಡಿದ್ದಾರೆ. ಮಹಿಳೆಯರಿಗೆ ಯೋಜನೆಗಳು ರಕ್ಷಣೆಗೆ ಇರಬೇಕು. ಆಕರ್ಷಣೆಗೆ ಅಲ್ಲ. ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಒಳಗಾಗಿ ಲಕ್ಷ್ಮಣರೇಖೆ ದಾಟಿದರೆ ಆ ಪಕ್ಷದವರೆ ನಿಮ್ಮನ್ನು ಕಿಡ್ನಾಪ್ ಮಾಡ್ತಾರೆ ಅಂತಾ ಹೇಳಿದ್ದಾರೆ.

ಶ್ರುತಿ ಹೇಳಿಕೆಗೆ ಎಲ್ಲಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಕಟು ಟೀಕೆಗಳನ್ನು ಮಾಡಲಾಗುತ್ತಿದೆ. ಅವರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಲಾಗುತ್ತಿದೆ. ಈ ಮೂಲಕ ಪದೆಪದೆ ಬಿಟ್ಟಿ ಭಾಗ್ಯ ಎಂದು ಮಹಿಳೆಯರಿಗೆ ಅವಮಾನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!