ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ವಿಶ್ವ ಚಾಂಪಿಯನ್ ಆಗ್ತಿದ್ದಂತೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಯ್ತು. ವಿದೇಶ ಪ್ರವಾಸದಿಂದ ಬಂದ ಪ್ರಧಾನಿ ಮೋದಿ ಸಹ ಸಿಂಧುಳನ್ನ ಹೊಗಳಿದ್ರು. ಆದ್ರೆ, ಸಿಂಧು ಗೆಲುವಿನ ಪ್ರವಾಹದಲ್ಲಿ ಮಾನಸಿ ಜೋಶಿ ಗೆಲುವು ಯಾರ ಕಣ್ಣಿಗೆ ಕಾಣ್ಲಿಲ್ಲ ಅನ್ನೋದು ಬೇಸರದ ಸಂಗತಿ ಎನ್ನಲಾಗ್ತಿದೆ.
ಶನಿವಾರ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಮಾನಸಿ ಜೋಶಿ ಕಂಪಾಟ್ರಿಯೋಟ್ ಪಾರುಲ್ ಪಾರ್ಮೆರ್ ನ್ನು ಸೋಲಿಸುವ ಮೊದ್ಲು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ರು. ಈ ಮೂಲಕ ಈ ಬಾರಿಯ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತ ಒಟ್ಟು 12 ಪದಕಗಳನ್ನ ಗೆದ್ದುಕೊಂಡಿದೆ. ಈ ಬಗ್ಗೆ ಯಾರು ಮಾತ್ನಾಡ್ಲಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಆಟಗಾರರು ಪ್ರಧಾನಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಕಂಚನ ಪದಕ ಗೆದ್ದ ಸುಕಾಂತ ಕದಮ್ ಪ್ರಧಾನಿ ಅವರಿಗೆ ಟ್ವೀಟ್ ಮಾಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನಾವೂ 12 ಪದಕ ಗೆದ್ದುಕೊಂಡಿದ್ದೇವೆ. ನಮ್ಗೂ ನಿಮ್ಮ ಆಶೀರ್ವಾದ ಬೇಕು. ನಿಮ್ಮ ಭೇಟಿಗೆ ನಮ್ಗೂ ಅವಕಾಶ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಮಾನಸಿ ಜೋಶಿ ಸಹ ಟ್ವೀಟ್ ಮಾಡಿದ್ದಾರೆ.