ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಅರಮನೆಗೆ ಆಗಮಿಸಿರುವ ಗಜಪಡೆಯ ತೂಕವನ್ನ ನಿನ್ನೆ ಚೆಕ್ ಮಾಡಲಾಗಿದೆ. ಇಂದು ಅರ್ಜುನ ನಾಯಕತ್ವದಲ್ಲಿ ಗಜಪಡೆ ನಗರದಲ್ಲಿ ತಾಲೀಮು ನಡೆಸಿದ್ವು.
ಅಭಿಮನ್ಯು, ಧನಂಜಯ, ಈಶ್ವರ, ವಿಜಯಾ, ವರಲಕ್ಷ್ಮಿ ಸೇರಿದಂತೆ ಆರು ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ವು. ಅರಮನೆಯಿಂದ ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ತಾಲೀಮು ನಡೆಸಿ ಮರಳಿ ಅರಮನೆಗೆ ಆಗಮಿಸಿದ್ವು.