ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಮದುವೆಯಾದ ಐದು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಅಶ್ವತ್ಥ್ ನಗರದ ಮನೆಯಲ್ಲಿ 23 ವರ್ಷದ ನವ್ಯಶ್ರೀ ಮೃತದೇಹ ಪತ್ತೆಯಾಗಿದೆ. ನೇಣುಬೀಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ.
ಕಳೆದ ಮೇ 25ರಂದು ನಗರ ಖ್ಯಾತ ವೈದ್ಯೆ ಜಯಶ್ರೀ ಅವರ ಮಗ ಆಕಾಶ್ ಹೊಮ್ಮರಡಿ ಜೊತೆಗೆ ನವ್ಯಶ್ರೀ ಮದುವೆಯಾಗಿದೆ. ಶನಿವಾರ ನಡೆದ ತುಳಸಿ ಪೂಜಾ ಕಾರ್ಯದಲ್ಲಿ ನವ್ಯಶ್ರೀ ಭಾಗಿಯಾಗಿ ಅರಿಶಿಣ, ಕುಂಕುಮ ಸ್ವೀಕರಿಸಿದರಂತೆ. ಕಾರ್ ಶೆಡ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.