ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಡಯಾಟಮ್ ಪರೀಕ್ಷೆಗೆ ಮುಂದಾಗಿದ್ದಾರೆ.
ಡಯಾಟಮ್ ಪರೀಕ್ಷೆ ಎಂದರೆ, ವ್ಯಕ್ತಿ ಸಾಯುವ ಮುನ್ನ ಶ್ವಾಸಕೋಶದೊಳಗೆ ನೀರು ಹೋಗಿತ್ತಾ ಇಲ್ಲವಾ ಅನ್ನೋದು. ಒಂದು ವೇಳೆ ಹೋಗಿದ್ದರೆ, ಅದು ಮೃತದೇಹ ಸಿಕ್ಕ ಕಾಲುವೆಯೊಳಗಿನ ನೀರಾ ಅಥವ ಬೇರೆ ನೀರಾ ಅನ್ನೋದರ ಪರೀಕ್ಷೆ ನಡೆಯುತ್ತೆ. ಹೀಗಾಗಿ ಅಧಿಕೃತ ಮಾಹಿತಿ ಬರುವ ತನಕ ಏನು ಹೇಳಲು ಆಗದು ಎಂದು ಪೊಲೀಸರು ಹೇಳುತ್ತಿದ್ದಾರೆ.