ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗದೆ ಇರುವುದಕ್ಕೆ ಬಂಡಾಯ ಎದ್ದಿರುವ ಬಿಜೆಪಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪರನ್ನು ದೆಹಲಿಗೆ ಬನ್ನಿ ಮಾತನಾಡೋಣ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗದೆ ಹೋಗಿದ್ದಾರೆ.
ಮಂಗವಾರ ಕರ್ನಾಟಕ್ಕೆ ಭೇಟಿಕೊಟ್ಟು ಬೆಂಗಳೂರು, ಚಿಕ್ಕಮಗಳೂರು ಭಾಗದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಈಶ್ವರಪ್ಪಗೆ ಫೋನ್ ಮಾಡಿ ಮಾತನಾಡಿದ್ದಾರೆ. ನಂತರ ಬುಧವಾರ ದೆಹಲಿಗೆ ಬರಲು ಹೇಳಿದ್ದಾರೆ. ಅದರಂತೆ ದೆಹಲಿಗೆ ಹೋದ ಈಶ್ವರಪ್ಪರನ್ನು ಅಮಿತ್ ಶಾ ಭೇಟಿಯಾಗಲೇ ಇಲ್ಲ.
ರಾತ್ರಿ 10 ಗಂಟೆಯ ನಂತರ ಅಮಿತ್ ಶಾ ಭೇಟಿಯ ಸಮಯ ನಿಗದಿಯಾಗಿದೆಂದು ಹೇಳಲಾಗಿತ್ತು. ನಂತರೂ ಅದು ಆಗಿಲ್ಲ. ಇದರಿಂದ ಈಶ್ವರಪ್ಪಗೆ ಮತ್ತಷ್ಟು ಅವಮಾನ ಆದಂತಾಗಿದೆ. ಮಾತನಾಡಲು ದೆಹಲಿ ತನಕ ಕರೆಸಿ ಇಡೀ ದಿನ ಕಾಯಿಸಿ ಕೊನೆಗೂ ಸಿಗದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಶಿವಮೊಗ್ಗದಲ್ಲಿ ತಾವು ಸ್ಪರ್ಧಿಸುವುದು ಖಚಿತ ಎಂದಿದ್ದಾರೆ. ಯಡಿಯೂರಪ್ಪ ಮಗ ರಾಘವೇಂದ್ರ ಸೋಲುವುದು ಅಮಿತ್ ಶಾ ಅವರಿಗೆ ಬೇಕಾಗಿರಬಹುದು ಅಂತಾ ಅಸಮಾಧಾನ ಹೊರ ಹಾಕಿದ್ದಾರೆ.