ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಂದಿನಂತೆ ಈ ಬಾರಿಯೂ ಸಿಲಿಕಾನ್ ಸಿಟಿಯಲ್ಲಿ ಮತದಾನ ಕಡಿಮೆಯಾಗಿದೆ. ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದರೂ ಜನರು ಮತ ಹಾಕಿಲ್ಲ. ಈ ಕುರಿತು ಗುರುವಾರ ಮಾತನಾಡಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಸರ್ಕಾರ ರಜೆ ನೀಡಿದರೂ ಬೆಂಗಳೂರಿನ ಜನತೆ ಮತ ಹಾಕದೆ ಇರುವುದು ಬೇಸರ ತರಿಸಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಶೇಕಡ 53ರಷ್ಟು ಮತದಾನವಾಗಿರುವುದು ಬೇಸರದ ಸಂಗತಿ. ಮುಂದೆ ಆದರೂ ಮತ ಹಾಕಲು ಮುಂದೆ ಬರಲಿ ಎಂದರು. ಮತದಾನೋತ್ತರ ಸಮೀಕ್ಷೆ ಏನೇ ಇರಲಿ. ನಮ್ಮ ವರದಿ ಪ್ರಕಾರ 120-125 ಸ್ಥಾನ ಬರುತ್ತೆ. ಸ್ವಂತ ಬಲದಿಂದ ನಾವೇ ಸರ್ಕಾರ ರಚನೆ ಮಾಡುತ್ತೇವೆ ಅಂತಾ ಹೇಳಿದರು.