ನಾಡಿನ ತುಂಬ ಸಂಭ್ರಮದ ಈದ್ ಮಿಲಾದ್

541

ಬೆಂಗಳೂರು: ಪ್ರವಾದಿ ಮಹಮ್ಮದ್ ಅವರ  ಜನ್ಮ ದಿನವನ್ನ ನಾಡಿನ ತುಂಬಾ ಮುಸ್ಲಿಂ ಭಾಂದವರು ಸಂಭ್ರಮದಿಂದ ಆಚರಿಸಿದ್ರು. ಮಸೀದಿಗಳಿಗೆ ಅಲಂಕಾರ ಮಾಡಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಜನ್ಮ ದಿನವನ್ನ ಆಚರಿಸಲಾಯ್ತು.

ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಹುಬ್ಬಳ್ಳಿ-ಧಾರವಾಡ, ವಿಜಯಪುರ, ಕಲಬುರಗಿ, ಬೀದರ, ಬಳ್ಳಾರಿ ಸೇರಿದಂತೆ ಎಲ್ಲೆಡೆ ಮಸೀದಿ, ಮದರಸಗಳಲ್ಲಿ ಈದ್ ಮಿಲಾದ್ ಆಚರಣೆ ಮಾಡಲಾಯ್ತು. ಮುಸ್ಲಿಂ ಮೊಹಲ್ಲಾಗಳಲ್ಲಿ ಕಾಲ್ನಡಿಗೆಯ ಮೆರವಣಿಗೆ ನಡೆಯಿತು.

ಇನ್ನು ಕೆಲವು ಕಡೆ ಸಾಹಿತ್ಯ, ಸಾಂಸ್ಕೃತಿಕ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನ ಆಯೋಜನೆ ಮಾಡುವ ಮೂಲಕ, ಈದ್ ಮಿಲಾದ್ ಹಬ್ಬವನ್ನ ವಿಶಿಷ್ಟವಾಗಿ ಆಚರಣೆ ಮಾಡಿಕೊಂಡು ಬರಲಾಯ್ತು.




Leave a Reply

Your email address will not be published. Required fields are marked *

error: Content is protected !!