ದೇಶ ಪ್ರತ್ಯೇಕಿಸಿದ್ದು ಕಾಂಗ್ರೆಸ್: ರಾಜನಾಥ ಸಿಂಗ್

333

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತ್ನಾಡಿದ ಕೇಂದ್ರ ಸಚಿವ ರಾಜನಾಥ ಸಿಂಗ್, ದೇಶವನ್ನ ವಿಭಜಿಸಿದ್ದು ಕಾಂಗ್ರೆಸ್ ಎಂದು ಹೇಳಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಪೌರತ್ವ ಕಾಯ್ದೆ ಜಾರಿಯ ಬಗ್ಗೆ ಭರವಸೆ ನೀಡಲಾಗಿತ್ತು. ಅದರಂತೆ ಪಕ್ಷ ನಡೆದುಕೊಂಡಿದೆ ಅಂತಾ ಹೇಳಿದ್ರು.

ವಿಭಜನೆಯ ಟೈಂನಲ್ಲಿ ಪಾಕಿಸ್ತಾನದಲ್ಲಿರುವ ಹಿಂದು, ಸಿಖ್, ಪಾರ್ಸಿ, ಜೈನ್, ಕ್ರೈಸ್ತ್ ಸಮುದಾಯಗಳ ಜನರು ಭಾರತಕ್ಕೆ ಆಶ್ರಯ ಕೋರಿ ಬಂದರೆ ಅವರಿಗೆ ಭಾರತದ ಪೌರತ್ವ ಕೊಡಿ ಎಂದು ಗಾಂಧೀಜಿ ಹೇಳಿದ್ರು. ಗಾಂಧೀಜಿ ಕನಸನ್ನ ಇದೀಗ ನನಸುಗೊಳಿಸಲಾಗ್ತಿದೆ ಎಂದರು.

ಸಿಎಎಯಿಂದ ಯಾರಿಗೂ ಸಮಸ್ಯೆಯಿಲ್ಲ. ಪಾಕಿಸ್ತಾನ, ಬಾಂಗ್ಲಾದಿಂದ ಆಶ್ರಯಕೋರಿ ಬರುವ ಬಹುತೇಕರು ದಲಿತ ಸಮುದಾಯದವರು. ಅಂತವರಿಗೆ ಭಾರತದಲ್ಲಿ ಗೌರವದಿಂದ ವಾಸಿಸಲು ಈ ಕಾಯ್ದೆ. ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ವಿರೋಧಿಸ್ತಿವೆ ಎಂದು ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!