ಮಕ್ಕಳ ಮದುವೆ ದಿನವೇ ಅಪಘಾತದಲ್ಲಿ ತಂದೆ ನಿಧನ

171

ಪ್ರಜಾಸ್ತ್ರ ಸುದ್ದಿ

ಸಾಗರ: ಮಕ್ಕಳಿಬ್ಬರ ಮದುವೆಗೆ ಹೊರಟಿದ್ದ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ ದುರಂತವೊಂದು ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ನಡೆದಿದೆ. ಮದುವೆ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಬನವಾಸಿಯ ಮಂಜುನಾಥಗೌಡ(64) ಮೃತ ದುರ್ದೈವಿ. ಗ್ರಾಮದ ಕಲ್ಯಾಣ ಮಂಟಪದಲ್ಲಿ ಇಬ್ಬರು ಹೆಣ್ಮಕ್ಕಳ ಮದುವೆ ನಿಶ್ಚಿಯವಾಗಿತ್ತು. ಅಲ್ಲಿಗೆ ಹೊರಟಿದ್ದ ವೇಳೆ ಶಿವಮೊಗ್ಗ ಮಾರ್ಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ದುರಂತ ಅಂದರೆ ಮೂರು ವರ್ಷಗಳ ಹಿಂದೆ ಇವರ ಪತ್ನಿ ಸಹ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಹೆಣ್ಮಕ್ಕಳು ಅಜ್ಜಿಯ ಮನೆಯಲ್ಲಿದ್ದು ಓದುತ್ತಿದ್ದರು. ಇದೀಗ ನೋಡಿದರೆ ಮದುವೆಯ ದಿನವೇ ತಂದೆ ಸಹ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ದುಃಖದ ನಡುವೆಯೂ ನಿಶ್ಚಿಯವಾಗಿದ್ದ ಮದುವೆ ನಿಲ್ಲಿಸುವುದು ಬೇಡವೆಂದು ಮದುವೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!