ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯ ವಿಜಯನಗರದ ಬಳಿ ನಿಂತಿದ್ದ ಬೈಕ್ ಗೆ ಇನೋವಾ ಕ್ರಿಸ್ಟಾ ಕಾರೊಂದು ರಭಸದಿಂದ ಗುದ್ದಿದೆ. ಇದ್ರಿಂದಾಗಿ ಬೈಕ್ ಸವಾರ ಸುಮಾರು 20 ಅಡಿ ಹಾರಿಬಿದ್ದಿದ್ದು, ಒಂದು ಮುರಿದಿದೆ.
ಗಾಯಗೊಂಡ ಬೈಕ್ ಸವಾರ ಹೊಸಳ್ಳಿಯ ಮಹೇಶ್ವರಂ ದೇವಸ್ಥಾನದ ಅರ್ಚಕ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಸವಾರು ಮದ್ಯ ಸೇವನೆ ಮಾಡಿ ಅತಿವೇಗವಾಗಿ ಬಂದು, ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿದ್ದಾರೆ. ಈ ವೇಳೆ ಓರ್ವ ಓಡಿ ಹೋಗಿದ್ದು, ಇನ್ನೊಬ್ಬನನ್ನ ಹಿಡಿದ ಸ್ಥಳೀಯರು, ಆತನ ಕಾರಿನಲ್ಲಿಯೇ ಗಾಯಗೊಂಡ ವ್ಯಕ್ತಿಯನ್ನ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಲಾಕ್ ಡೌನ್ ಇರುವುದ್ರಿಂದ ರಸ್ತೆಗಳು ಖಾಲಿ ಇದ್ದು, ಅತಿ ವೇಗವಾಗಿ ಬಂದು ಅನಾಹುತ ಸೃಷ್ಟಿಸ್ತಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.