ಪ್ರಜಾಸ್ತ್ರ ಸುದ್ದಿ
ಭೋಪಾಲ್: ಮಧ್ಯಪ್ರದೇಶ ಸಚಿವೆಯಾಗಿದ್ದ ಇಮರ್ತಿದೇವಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಇದಕ್ಕೆ ಮಾಜಿ ಸಿಎಂ ಕಮಲನಾಥ ಐಟಂ ಎಂದು ಟೀಕಿಸಿದ್ರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಇಮರ್ತಿದೇವಿ, ಸೋನಿಯಾ ಗಾಂಧಿ ಅವರೆ ನಿಮ್ಗೂ ಮಗಳಿದ್ದಾಳೆ. ಅವಳಿಗೂ ಐಟಂ ಅಂದ್ರೆ ಸುಮ್ಮನಿರುತ್ತಿದ್ರಾ? ಇಂಥವರನ್ನ ಕೂಡಲೇ ತೆಗೆದು ಹಾಕಿ ಎಂದು ಆಗ್ರಹಿಸಿದ್ದಾರೆ.
ಡಾಬಾ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆ ಪ್ರಚಾರದ ವೇಳೆ, ಮಾಜಿ ಸಿಎಂ ಕಮಲನಾಥ ಇಮರ್ತಿದೇವಿಯನ್ನ ಏನ್ ಐಟಂ ಇವಳು ಎಂದಿದ್ರು. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಇಮರ್ತಿದೇವಿ, ಕಾಂಗ್ರೆಸ್ ಹಿರಿಯ ನಾಯಕರು ಆಡಿರುವ ಮಾತಿನ ವಿರುದ್ಧ ಕಿಡಿ ಕಾರಿದ್ದು, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನ ಪ್ರಶ್ನಿಸಿದ್ದಾರೆ.