ಪ್ರಜಾಸ್ತ್ರ ಸುದ್ದಿ
ಮಧ್ಯಪ್ರದೇಶ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಿರುವ ಚುನಾವಣಾ ಆಯೋಗದ ವಿರುದ್ಧ, ಮಾಜಿ ಸಿಎಂ ಕಮಲನಾಥ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಪದೆಪದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಮಲನಾಥ ಅವರನ್ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ರದ್ದು ಮಾಡಿದೆ. ಇದನ್ನು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿ ತಯಾರಿಸುವುದು ಪಕ್ಷಗಳ ಹಕ್ಕು. ಅದನ್ನ ಚುನಾವಣೆ ಆಯೋಗ ಉಲ್ಲಂಘಿಸಿದೆ ಎಂದು ಕಿಡಿ ಕಾರಿದ್ದಾರೆ.