ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದ ಖ್ಯಾತ ನಿರ್ದೇಶಕ, ಕಲಾ ಸಾಮ್ರಾಟ ಎಸ್.ನಾರಾಯಣ ಅವರಿಗೆ ಬರೋಬ್ಬರಿ 1.6 ಕೋಟಿ ರೂಪಾಯಿ ವಂಚಿಸಲಾಗಿದೆ. ಸಿನಿಮಾ ಮಾಡೋಣವೆಂದು ನಂಬಿಸಿದ ಐವರು, ನಾಲ್ಕೈದು ದಿನ ಶೂಟಿಂಗ್ ಮಾಡಿದಂತೆ ಮಾಡಿ ನಿರ್ದೇಶಕ ಎಸ್.ನಾರಾಯಣ ಅವರಿಗೆ ಮೋಸ ಮಾಡಿದ್ದಾರೆ.
ಶೂಟಿಂಗ್ ನಡೆಯುತ್ತಿದ್ದ ಟೈಂನಲ್ಲಿ ದಿಢೀರ್ ಎಂದು ಹಣದ ಸಮಸ್ಯೆಯಾಗಿದೆ. ಸೈಟ್ ಮಾರಿಯಾದ್ರೂ ಸಿನಿಮಾ ಮಾಡ್ತೀವಿ ಎಂದಿದ್ದಾರೆ. ಅಲ್ದೇ, ಆ ಸೈಟ್ ನಿಮ್ಗೆ ಮಾರಾಟ ಮಾಡುತ್ತೇವೆ ಎಂದು ಹೇಳಿ ದಾಖಲೆ ಪತ್ರ ನೀಡಿ 1.6 ಕೋಟಿ ರೂಪಾಯಿ ಪಡೆದಿದ್ದಾರಂತೆ.
ಬಳಿಕ ಎಸ್.ನಾರಾಯಣ ಸೈಟ್ ದಾಖಲೆಗಳೊಂದಿಗೆ ಬ್ಯಾಂಕ್ ಗೆ ಹೋಗಿ ಸಾಲ ಕೇಳಲು ಹೋಗಿದ್ದಾರೆ. ಆದ್ರೆ, ದಾಖಲೆ ಪರಿಶೀಲನೆ ಮಾಡಿದ ಬ್ಯಾಂಕ್ ನವರು ಇದು ನಕಲಿ ದಾಖಲೆಗಳು. ಸಾಲ ನೀಡುವುದಿಲ್ಲವೆಂದಿದ್ದಾರೆ. ಆಗ ಇವರಿಗೆ ಶಾಕ್. ಇದೀಗ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜನರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾವ ರೀತಿ ಮೋಸ ಮಾಡ್ತಾರೆ ಅನ್ನೋದಕ್ಕೆ ಉದಾಹರಣೆ ಇದು.