ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಸೇರಿದಂತೆ 7 ಜನ ಆರೋಪಿಗಳ ನ್ಯಾಯಾಂಗಬಂಧನ ವಿಸ್ತರಿಸಲಾಗಿದೆ.
ಇಂದು ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ, ಗಗನ್, ಧನರಾಜ್, ರಮೇಶ್, ಶ್ರೀಕಾಂತ್, ಚೆನ್ನಾ ನಾಯ್ಕ, ಪ್ರಜ್ವಲ್ ಕಸ್ಟಡಿ ಅವಧಿ ಇಂದು ಮುಗಿದಿತ್ತು. ಹೀಗಾಗಿ ಕೋರ್ಟ್ ಎದುರು ಹಾಜರು ಪಡಿಸಲಾಯಿತು. ಇನ್ನು ತನಿಖೆಗೆ ಅವಶ್ಯಕತೆ ಇದೆ ಎಂದು ತನಿಖಾಧಿಕಾರಿಗಳು ಹೇಳಿದ್ದರಿಂದ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಆರೋಪಿಗಳ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 26ರಂದು ಅವಕಾಶ ನೀಡಲಾಗಿದೆ.