ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಹೋಟೆಲ್ ವೊಂದರಲ್ಲಿ ಡಿಎಂಕೆ ಮುಖಂಡ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಅವರು ಮೃತಪಟ್ಟಿದ್ದಾರೆ. ಮಧುರೈನ ವಿ.ಕೆ ಗುರುಸ್ವಾಮಿ ಭಾನುವಾರ ಮೃತಪಟ್ಟಿದ್ದಾರೆ.
ಕಳೆದ ಸೆಪ್ಟೆಂಬರ್ 4ರಂದು ಬಾಣಸವಾಡಿಯಲ್ಲಿರುವ ಸುಖಸಾಗರ ಹೋಟೆಲ್ ನಲ್ಲಿ ಕುಳಿತಿದ್ದರು. ಆಗ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಹಳೇ ವೈಷಮ್ಯದಿಂದ ಈ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ. ಡಿಎಂಕೆ ನಾಯಕ ಎಂ.ಕೆ ಆಳಗಿರಿಯ ಆಪ್ತರಾಗಿದ್ದರು.