ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಗ್ ಬಾಸ್ ಮನೆಯಿಂದ ಅವರನ್ನು ಬಂಧಿಸಲಾಗಿದೆ.
ಇಂದು ನಗರದ 2ನೇ ಎಸಿಜೆಂ ಕೋರ್ಟ್ ಎದುರು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆಯಂತೆ.
ಸಂತೋಷ್ ಕೊರಳಲ್ಲಿ ಧರಿಸಿರುವ ಚಿನ್ನದ ಲಾಕೇಟ್ ನಲ್ಲಿ ಹುಲಿಯ ಉಗುರು ಇದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಬಂಧಿಸಲಾಗಿದೆ. 3 ವರ್ಷಗಳ ಹಿಂದೆ ಅದನ್ನು ಖರೀದಿಸಿದಂತೆ ಬಿಲ್ ಬಗ್ಗೆ ಮಾಹಿತಿ ಇಲ್ಲ. ಅದನ್ನು ಕೊಟ್ಟವರು ಯಾರು? ಎಲ್ಲಿದ್ದಾರೆ ಏನು ಅನ್ನೋದೆಲ್ಲದರ ಕುರಿತು ತನಿಖೆ ನಡೆಸಲಾಗುತ್ತಿದೆ. ಒಂದು ವೇಳೆ ಅದು ನಿಜವಾಗಿಯೂ ಹುಲಿಯ ಉಗುರು ಆಗಿದ್ದು ಸಾಬೀತಾದರೆ 3 ರಿಂದ 7 ವರ್ಷ ಜೈಲುಶಿಕ್ಷೆಯಾಗಲಿದೆ. ಸಧ್ಯ ಕೋರ್ಟ್ ಗೆ ರಜೆ ಇರುವುದರಿಂದ ಬುಧವಾರ ಸಂತೋಷ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.