ನವದೆಹಲಿ: ಮಹಾಮಾರಿ ಕರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಇದನ್ನ ಸಮರ್ಥವಾಗಿ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಹೇಳಿದ್ದಾರೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಹೇಳಿರುವ ಅವರು, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುವ ಮೊದ್ಲೇ, ಈ ರೋಗ ತಡೆಗೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್-19ನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಿ, ಇದನ್ನ ತಡೆಗಟ್ಟಲು ಎಲ್ಲ ರೀತಿ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ಹೇಳಿತ್ತು. ಹೀಗಾಗಿ ಜನವರಿ 17 ರಿಂದಲೇ ಭಾರತ ಕ್ರಮಗಳನ್ನ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಮಾರ್ಚ್ 4ರ ವರೆಗೆ ದೇಶದಲ್ಲಿ 29 ಕರೋನಾ ವೈರಸ್ ಸೋಂಕು ಕೇಸುಗಳು ಪತ್ತೆಯಾಗಿವೆ. ಸಚಿವರ ತಂಡ ಇದನ್ನ ನೋಡಿಕೊಳ್ತಿದೆ ಎಂದಿದ್ದಾರೆ.