ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿ ಮಾತ್ನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಈ ಘಟನೆಯಿಂದ ನನ್ನ ಕುಟುಂಬದ ಮರ್ಯಾದೆ ಬೀದಿಪಾಲಾಗಿದೆ ಎಂದರು. ಇದರಿಂದ ನನ್ಗೆ ನೋವಾಗಿದೆ. ಯಾರ ಬಳಿ ಹೇಳಲಿ ಎಂದು ಕಣ್ಣೀರು ಹಾಕಿದರು.
ನನ್ನ ಮೇಲೆ ಎಲ್ಲ ಪಕ್ಷದವರಿಗೆ ಗೌರವ ಇದೆ. ಯಾರೊಂದಿಗೆ ದ್ವೇಷವಿಲ್ಲ. ಬಿಜೆಪಿ ಸರ್ಕಾರ ರಚನೆಗೆ ನಾನೇ ಕಾರಣಗಿದ್ದೆ. ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಷಡ್ಯಂತ್ರ ನಡೆಸಲಾಗಿದೆ ಎಂದರು. ಸಿಎಂ, ಕುಮಾರಸ್ವಾಮಿ, ಹೆಚ್. ಡಿ ರೇವಣ್ಣ ಅವರು ಧೈರ್ಯ ತುಂಬಿದರು. ನಾನೇ ಸ್ವಯಂ ಪ್ರೇರಿತನಾಗಿ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಲ್ಲ ಎಂದು ಹೇಳಿದರು.