ಚೆನ್ನೈ: ತಮಿಳುನಾಡಿನ ತಿರುಚ್ಚಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಬದುಕಿ ಬರ್ಲಿಲ್ಲ. ಸತತ ಕಾರ್ಯಾಚರಣೆ ಬಳಿಕವೂ 2 ವರ್ಷದ ಸುಜಿತ ಜಿವಂತವಾಗಿ ಸಿಗ್ಲಿಲ್ಲ. ಇಂದು ಮುಂಜಾನೆ ಬಾಲಕನ ಮೃತದೇಹ ಹೊರ ತೆಗೆಯಲಾಗಿದೆ.
ಸತತ ಕಾರ್ಯಾಚರಣೆ ಬಳಿಕ ಸೋಮವಾರ ರಾತ್ರಿ ಇನ್ನು 12 ಗಂಟೆಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ರು. ಆದ್ರೆ, ರಕ್ಷಣೆ ವೇಳೆ ದೇಹ ಕೊಳೆತ ವಾಸನೆ ಬರ್ತಿರುವುದು ಖಚಿತವಾದ್ಮೇಲೆ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ರು. ಇಂದು ಮುಂಜಾನೆ ಸುಜಿತ ವಿಲ್ಸನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ರಾಧಕೃಷ್ಣನ್ ತಿಳಿಸಿದ್ದಾರೆ.
ಕಲ್ಲುಬಂಡೆಗಳಿದ್ದ ಜಾಗವಾಗಿರುವುದ್ರಿಂದ ರಕ್ಷಣಾ ಕಾರ್ಯ ನಿಧಾನವಾಯ್ತು. 26 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದ, ಹಗ್ಗದ ಮೂಲಕ ಮೇಲೆತ್ತುವ ಟೈಂನಲ್ಲಿ ಮತ್ತೆ 70 ಅಡಿ ಆಳಕ್ಕೆ ಕುಸಿದು ಹೋದ. ಇದ್ರಿಂದಾಗಿ ಸತತವಾಗಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ರೂ ಮಗು ಬದುಕಿ ಬರ್ಲಿಲ್ಲ.