ಸಾಲುಮರದ ತಿಮ್ಮಕ್ಕನ ಬಗ್ಗೆ ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಲ್ಲಿಯೂ ಹೆಸರಿದೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಯ್ತು. ಅವರಿಗೆ ಸಂದ ಗೌರವ, ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಇಂಥಾ ಕನ್ನಡದ ಸಾಧಕಿ ಬಗ್ಗೆ ನಡದ ನಟಿಯೊಬ್ಬರಿಗೆ ನಾಲ್ಕು ಮಾತು ಹೇಳಲು ಆಗ್ಲಿಲ್ಲ.
ಇತ್ತೀಚಿಗೆ ತಮಿಳುನಾಡಿನಲ್ಲಿ ಪ್ರಶಸ್ತಿ ಕಾರ್ಯಕ್ರಮವೊಂದು ನಡೆದಿದೆ. ಅಲ್ಲಿ ಸಾಲುಮರದ ತಮ್ಮಕ್ಕ ಅವರಿಗೆ ಗೌರವಿಸಲಾಗಿದೆ. ಅವರು ಕನ್ನಡದಲ್ಲಿ ಮಾತ್ನಾಡಿದ್ದನ್ನ ಭಾಷಾಂತರಿಸಲು ನಟಿಗೆ ಹೇಳಿದ್ರೆ, ಕನ್ನಡವನ್ನೇ ಸರಿಯಾಗಿ ಅರ್ಥ ಮಾಡಿಕೊಂಡು ಹೇಳಲು ಬರ್ಲಿಲ್ಲ. ಆಗ, ತಮಿಳು ನಟ ವಿವೇಕ, ಸರಾಗವಾಗಿ ಸಾಲುಮರದ ತಿಮ್ಮಕ್ಕನ ಸಾಧನೆಯನ್ನ ಹೇಳಿದ್ರು.
ಹಿರಿಯ ಜೀವದ ಸಾಧನೆ ಕುರಿತು ಎಳೆಎಳೆಯಾಗಿ ಬಿಡಿಸಿಟ್ಟರು. ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಕನ್ನಡದ ಆ ನಟಿಗೆ ಮಾತ್ರ ನಾಲ್ಕು ಮಾತುಗಳು ಹೇಳುವುದು ಬಿಡಿ ಅದನ್ನ ಸರಿಯಾಗಿ ಭಾಷಾಂತರ ಸಹ ಮಾಡಲು ಆಗ್ಲಿಲ್ಲ. ಈ ನಟಿ ಹಲವು ಕಾರಣಗಳಿಂದಾಗಿಯೇ ಟ್ರೋಲ್ ಆಗ್ತಿದ್ದಾಳೆ.